Karnataka Breaking News Live: ಪಂಚ ರಾಜ್ಯ ಚುನಾವಣೆಗೆ ಕರ್ನಾಟಕವನ್ನೇ ಕಲೆಕ್ಷನ್ ಕೇಂದ್ರವನ್ನಾಗಿಸಿದೆ ಕಾಂಗ್ರೆಸ್: ನಳಿನ್

ಒಬ್ಬರಿಂದಾಗಿ ಮೂಲನಿವಾಸಿಗಳಲ್ಲಿ ಒಗ್ಗಟ್ಟು ಬಂದಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಪೊಲೀಸರ ಕಣ್ಗಾವಲಿನಲ್ಲಿ ‘ಮಹಿಷ’ ಉತ್ಸವಕ್ಕೆ ಚಾಲನೆ ದೊರೆತಿದ್ದು, ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿ,ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿಯಿಂದ ಆಶಯ ನುಡಿದಿದ್ದು, ಮಹಿಷ ಉತ್ಸವದಲ್ಲಿ ಮೂಲ ನಿವಾಸಿಗಳ ಶಕ್ತಿ ಪ್ರದರ್ಶನ ಆಗಿದೆ. ನಾವು‌ ಭೀಮನ ಮಕ್ಕಳು, ನಾನು ಒಬ್ಬರಿಗೆ ಥ್ಯಾಂಕ್ಸ್ ಹೇಳುತ್ತೇನೆ, ನಿಮ್ಮಿಂದಲೇ ನಮ್ಮ ಜನರನ್ನು ಒಗ್ಗಟ್ಟು ಮಾಡಿದ್ದೀರಿ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರುಟೌನ್ ಹಾಲ್ ಸಮೀಪ ಮಹಿಷ ಉತ್ಸವ ನಡೆಯುತ್ತಿದ್ದು ಉತ್ಸವದಲ್ಲಿ ಮಹಿಷಾಸುರ ಚಕ್ರವರ್ತಿ ಎಂಬ ಪೋಸ್ಟರ್ ಪ್ರದರ್ಶನ ಮಾಡಲಾಗಿದೆ. ಬೈಕ್ ರ್ಯಾಲಿ ಜೊತೆ ಮಹಿಷ ಟ್ಯಾಬ್ಲೋ ಕೂಡಾ ತರಲಾಗಿದೆ.

Source link